ಕನ್ನಡ ಬರಹವನ್ನು ಸರಿಪಡಿಸೋಣ

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 382
ಅಚ್ಚು: ತಿದ್ದಿ ದೊಡ್ಡದು ಮಾಡಿರುವ ಎರಡನೆಯ ಅಚ್ಚು, 2009
ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ  down_arrow

ಕೊಂಡುಕೊಳ್ಳಿರಿ
munnota 
totalkannada
navakarnataka


 

ವಿವರಗಳು

ಇವತ್ತಿನ ಸಮಾಜದಲ್ಲಿ ಬರಹವನ್ನು ಬಳಸಲು ತಿಳಿಯದವರು ಯಾರೂ ಸಂತ್ರುಪ್ತಿಯಿಂದ ಬದುಕಲು ಸಾದ್ಯವಾಗದು. ಅಂತಹ ಮಹತ್ವ ಬರಹಕ್ಕೆ ಬಂದಿದೆ. ಇದಲ್ಲದೆ, ಇವತ್ತು ಒಂದು ಸಮಾಜ ಮುಂದೆ ಬರಬೇಕಿದ್ದಲ್ಲಿ, ಅದರಲ್ಲಿರುವ ಎಲ್ಲ ವರ್‍ಗದ ಜನರೂ ಸಮಾನವಾಗಿ ಬರಹವನ್ನು ತಿಳಿದಿರುವ ಅವಶ್ಯಕತೆ ಇದೆ. ಕರ್‍ನಾಟಕದಲ್ಲಿ ಇದು ಸಾದ್ಯವಾಗದಿರುವುದಕ್ಕೆ ಹಲವು ಮುಕ್ಯವಾದ ಕಾರಣಗಳಿವೆ.

ಕನ್ನಡ ಬರಹದಲ್ಲಿ ಅತಿಯಾಗಿ ಸಂಸ್ಕ್ರುತ ಪದಗಳನ್ನು ಬಳಸುತ್ತಿರುವುದು ಇಂತಹ ಕಾರಣಗಳಲ್ಲಿ ಒಂದು; ಈ ಪದಗಳ ಉಚ್ಚಾರಣೆ ಹೇಗೆಯೇ ಇರಲಿ, ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಕನ್ನಡದಲ್ಲೂ ಬರೆಯಬೇಕೆಂಬ ನಿಯಮವನ್ನು ಮಾಡಿರುವುದು ಮತ್ತು ಅದಕ್ಕಾಗಿ ಹಲವು ಹೆಚ್ಚಿನ ಅಕ್ಶರಗಳನ್ನು ಕನ್ನಡ ಲಿಪಿಯಲ್ಲಿ ಉಳಿಸಿಕೊಂಡಿರುವುದು ಇನ್ನೊಂದು; ಈ ಎರಡು ಕಾರಣಗಳಿಂದಾಗಿ ಕನ್ನಡ ಬರಹ ಇವತ್ತು ಸಾಮಾನ್ಯ ಕನ್ನಡಿಗರಿಂದ ದೂರವೇ ಉಳಿದಿದೆ.

ಅದು ಎಲ್ಲರ ಸೊತ್ತಾಗಬೇಕಿದ್ದಲ್ಲಿ ಮೇಲಿನ ಎರಡು ತೊಂದರೆಗಳನ್ನೂ ನಿವಾರಿಸುವುದು ಅವಶ್ಯ. ಸಂಸ್ಕ್ರುತ ಪದಗಳ ಬಳಕೆಯನ್ನು ಆದಶ್ಟು ಮಟ್ಟಿಗೆ ಕಡಿಮೆ ಮಾಡಬೇಕು ಮತ್ತು ಬಳಸುವುದಿದ್ದರೂ ಅವನ್ನು ಉಚ್ಚಾರಣೆಯಲ್ಲಿರುವ ಹಾಗೆಯೇ ಬರೆಯಲು ಸಾದ್ಯವಿರಬೇಕು. ಹಾಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯಬೇಕಿಂದಿರುವವರಿಗೆ ಒಟ್ಟು ಹದಿನಾರು ಅಕ್ಶರಗಳನ್ನು ಕಲಿಸಬೇಕಾಗುವುದಿಲ್ಲ. ಈ ಎರಡು ಸುದಾರಣೆಗಳು ಯಾಕೆ ಅವಶ್ಯ ಮತ್ತು ಅವನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

 

facebooktwitter